رَزَّانَةُ الْعِلْمِ مَنْ كَانَت تُثَقِّلُهُ
يَمْشِي بِهَا خَاضِعًا مِقْدَارَ أَثْقَالِ
وَيَسْجُدُ الْغُصْنُ بِالْأَثْمَارِ اِذْحَمَلَتْ
أَشْجَارُهَا دَالِيًا ِمنْ بَعْدِ إِدْلَالِ
ದೀನೀ ವಿಜ್ಞಾನವನ್ನು ಕರಗತ ಮಾಡಿದವನಲ್ಲಿ ಅದರ ಕಾರಣದಿಂದ ತನ್ನೆಲ್ಲಾ ಕಾರ್ಯಗಳಲ್ಲಿ ವಿನಯವು ಮೇಲೈಸುವುದು. ವಿಜ್ಞಾನವು ಅಧಿಕಗೊಂಡಂತೆ ವಿನಯವು ಅಧಿಕಗೊಳ್ಳುವುದು. ಮರದ ಎತ್ತರದ ಕೊಂಬೆಗಳಲ್ಲಿ ಹಣ್ಣುಗಳು ಉಂಟಾದರೆ ಅದರ ಕಾರಣದಿಂದ ಅದು ಬಾಗುವುದು. ಹಣ್ಣುಗಳು ಹೆಚ್ಚಿದಂತೆ ಅದು ಇನ್ನಷ್ಟು ಬಾಗಿ ಬಾಗಿ ಬರುವುದು
وَ مَنْ لَهُ رِفْعَةٌ بِالْعِلْمِ وَالنَّسَبِ
لَهُ التَّوَاضُعُ مِنْهَا أَحْسَنُ الصِّفَةِ
أَمَا تَرَي أَنْجُمًا فِى دَاخِلِ الْغُدُرِ
تَحُلُّ لَيْسَ لَهَا مِنْ ذَاكَ مِن ضَعَةٍ
ವಿದ್ಯೆ, ಮತ್ತು ಕುಲಮಹಿಮೆಗಳ ಉನ್ನತಿಯಲ್ಲಿರುವ ವ್ಯಕ್ತಿಗೆ ವಿನಯ ಎಂಬುವುದು ಆತನಿಗೆ ಅತ್ಯುನ್ನತ ಸದ್ಗುಣವಾಗಿದೆ.
ಆಕಾಶಗಂಗೆಯಲ್ಲಿರುವ ನಕ್ಷತ್ರಗಳ ಪ್ರತಿಬಿಂಬ ಮಲಿನ ನೀರಿಗೆ ಬೀಳುವುದರಿಂದ ಅದಕ್ಕೆ ಯಾವುದೇ ನಿಂದ್ಯತೆಯು ಉಂಟಾಗದು.
مَانِلْتَ اِنْ لَمْ تَنَلْ عِلْمًاخُلِقْتَ لَهُ
وَاِنْ تَنَلْ غَيْرَهُ مِنْ سَائِرِ النِّعَمِ
مَافَاتَ مِنْكَ اِذَا نِلْتَ الْعُلُومَ وَاِنْ
فَاتَتْ سِوَاهَا الدُّنَا يَاعَالِيَ الْكَرَمِ
ವಿಜ್ಞಾನವೆಂಬ ಅಮೂಲ್ಯ ವಸ್ತುವನ್ನು ಕರಗತ ಮಾಡಲು ಸೃಷ್ಟಿಸಲ್ಪಟ್ಟ ನೀನು ವಿಜ್ಞಾನವಲ್ಲದ ಯಾವುದೇ ಅನುಗ್ರಹವನ್ನು ಕೈವಶ ಪಡಿಸಿದರೂ ನೀನು ( ವಾಸ್ತವದಲ್ಲಿ)ಏನನ್ನೂ ಸಾದಿಸಿಲ್ಲ.
ವಿಜ್ಞಾನವನ್ನು ಕರಗತ ಮಾಡಿ ಮತ್ತೆಲ್ಲಾ ಐಹಿಕ ಅನುಗ್ರಹಗಳು ನಿನಗೆ ನಷ್ಟವಾದರೂ ವಾಸ್ತವದಲ್ಲಿ ನಿನಗೆ ಯಾವುದೂ ನಷ್ಟವಾಗಿಲ್ಲ.
(ಓ ಮಾನ್ಯತೆಯ ಉನ್ನತಿಯಲ್ಲಿರುವವನೇ ...)
وَالْعِلْمُ اَفْضَلُ مِنْ عَقْلٍ وَلَوْسَبَبًا
لَهُ كَتَفْضِيلِ شُهْدِ النَّحْلِ لاَ النَّحْلِ
وَمَنْ لَهُ الْعِلْمُ ذُوعَقْلٍ وَذُوعَقْلٍ
ذُوالْجَهْلِ اِذْ لَا لَهُ عِلْمٌ سِوَي الْعَقْلِ
ಬುದ್ಧಿಮತ್ತೆ ಇದ್ದರೆ ಮಾತ್ರ ವಿಜ್ಞಾನ ಸಂಪಾದಿಸಲು ಸಾಧ್ಯ.ಆದರೂ ಬುದ್ಧಿಗಿಂತಲೂ ಶ್ರೇಷ್ಠವಾದುದು ವಿದ್ಯೆಯಾಗಿದೆ. ಜೇನುತುಪ್ಪವು ಜೇನುನೊಣಗಳ ಉತ್ಪತ್ತಿಯಾದರೂ ಜೇನುನೊಣಕ್ಕಿಂತ ಶ್ರೇಷ್ಠತೆ ಜೇನುತುಪ್ಪಕ್ಕೆ ತಾನೆ!
ಜ್ಞಾನಿಯು ಬುದ್ಧಿವಂತ ಎಂಬುವುದು ಸ್ಪಷ್ಟ. ಆದರೆ ಬುದ್ಧಿ ಮಾತ್ರವಿರುವವನು ಅಜ್ಞಾನಿಯಾಗಿರುವನು.
وَلَا يَغُرَّنْكَ عِلْمٌ اَنْتَ تَعْلَمُهُ
فَالْعِلْمُ عِلْمٌ اِذَا مَازَانَهُ الْعَمَلُ
إِنَّ الْغَنِيَّ غَنِيٌّ فِي غِنَاهُ اِذَا
لَمْ يَمْنَعَنْ سَائِلًا مِنْ جُودِهِ الْبُخْلُ
ನೀನು ಕಲಿತ ವಿದ್ಯೆಯು ನಿನ್ನನ್ನು ವಂಚಿಸದಿರಲಿ!
ವಿದ್ಯೆಯನ್ನು ಕರ್ಮವು ಪ್ರೌಢಿಯಾಗಿಸಿದರೆ ಮಾತ್ರವೇ ಅದು ನಿನ್ನನ್ನು ಉನ್ನತಿಗೆ ತಲುಪಿಸ ಬಲ್ಲುದು.
ಧನಿಕನನ್ನು ಧನಿಕನಾಗಿಸುವುದು ಯಾಚಿಸಿ ಬರುವವರನ್ನು ಆತನ ಜಿಪುಣತೆಯು ತಡೆಯಾಗದಿದ್ದಾಗ ಮಾತ್ರ.
لَوْ نِلْتَ عِلْمًا لَنِلْتَ الْعِزَّ قَدْ رَحَلَتْ
اِلَيْكَ مِنْ كُلِّ مِصْرٍ خُضَّعًا ثُلَلُ
يَسْعٰي اِلٰي مُثْمِرٍ مِنْ كُلِّ أَمْكِنَةٍ
طَيْرٌ وَلَيْسَ اِلَيْهَا الْخَطُّ وَالرُّسُلُ
ನೀನು ವಿದ್ಯಾವಂತನಾದರೆ ಅಭಿಮಾನವುಲ್ಲವನಾಗುವೆ.
ತದನುಸಾರ ವಿವಿಧ ದಿಕ್ಕುಗಳಿಂದ ಜನರು ವಿನಯಾನ್ವಿತರಾಗಿ ( ಸಮಸ್ಯೆ ಪರಿಹಾರಕ್ಕಾಗಿ ) ನಿನ್ನನ್ನು ಸಮೀಪಿಸುವರು.
ಹಣ್ಣುಗಳಿಂದ ಸಮೃದ್ಧವಾದ ವೃಕ್ಷದ ಬಳಿ ಯಾವುದೇ ಪತ್ರವೋ ದೂತನೋ ಇಲ್ಲದೆ ಪಕ್ಷಿಗಳು ಬರುವುದು ಸಹಜ...
اُنْظُرْ اِلَي الْمَرْءِ هَلْ عِلْمٌ لَهُ وَتُقًي
وَلَا اِلٰي فَخْرِهِ بِالنَّسَبِ وَالْعِتَرِ
وَ اَيْنَ دُرٌّ نَشٰا وَالْقَزُّ وَالْعَسَلُ
كَذَا الزَّبٰادُ وَاَظْفَارٌ مِنَ الْعَِطَرِ
ಒಬ್ಬ ವ್ಯಕ್ತಿಗೆ ವಿದ್ಯೆ, ಮತ್ತು ಭಕ್ತಿ ,ಇದೆಯೇ ಎಂಬುದನ್ನು ನೋಡಬೇಕೇ ವಿನಹ ಕುಟುಂಬ,ಕುಲ,ಮಹಿಮೆಯನ್ನು ನೋಡಬೇಡ.
ಮುತ್ತು, ರೇಶ್ಮೆ, ಜೇನುತುಪ್ಪ, ಕಸ್ತೂರಿ, ಮತ್ತು ಹಲವು ಸುಗಂಧ ದ್ರವ್ಯಗಳ ಉದ್ಭವವು ಎಲ್ಲಿಂದ.?
ಉದ್ಭವ ಎಲ್ಲಿಂದ ಎಂಬುವುದಕ್ಕಲ್ಲ ಪರಿಗಣನೆ. (ಹೊರತು ಆ ವಸ್ತುವಿಗಾಗಿದೆ ಹಾಗೆ ಕುಲ ಗೋತ್ರಕ್ಕಲ್ಲ ಸ್ಥಾನ ಆತನ ವಿದ್ವತ್ತು ಮತ್ತು ಭಕ್ತಿಗಾಗಿದೆ.)
وَلَا تَضَعْ مَنْ نَشٰا فِي الْعِلْمِ دُونَكَ اِذْ
لَوْ لَمْ يَكُنْ لَمْ يَكُنْ فِي عِلْمِكَ الْفَضْلُ
فَكُلُّ شَيْءٍ لَهُ اَعْلٰى وَاَسْفَلُ لَمْ
يَقُمْ اَعَالِيهِ اِلَّا شَادَهَا السُّفُلُ
ವಿದ್ಯೆಯಲ್ಲಿ ನಿನಗಿಂತ ಕೆಳಮಟ್ಟದಲ್ಲಿರುವವನನ್ನು ನೀನು ತಾತ್ಸಾರ ಮಾಡಬೇಡ.
(ನಿಂದಿಸಬೇಡ)
ಕಾರಣ ಆತನಿಲ್ಲದಿದ್ದರೆ ನಿನ್ನ ವಿದ್ಯೆಗೆ ಯಾವುದೇ ಬೆಲೆ ಇಲ್ಲ.
ಮೇಲ್ಭಾಗ ಮತ್ತು ಕೆಲ ಭಾಗವಿರುವ ಯಾವುದೇ ವಸ್ತುವು (ಉದಾ : ಕಟ್ಟಡ) ಅದರ ಕೆಲ ಭಾಗವು ಮೇಲ್ಭಾಗವನ್ನು ಹಿಡಿದಿಟ್ಟರೆ ಮಾತ್ರ ಮೇಲ್ಭಾಗವು ನೆಲೆ ನಿಲ್ಲುವುದು..
( ಅವಿದ್ಯಾವಂತನೆಂಬ ಕೆಲಗಿರುವವನು ವಿದ್ಯಾವಂತನೆಂಬ ಮೇಲಿರುವವನನ್ನು ಹಿಡಿದಿಟ್ಟಿರುವನು)
وَ لٰا يُرٰي كٰامِلٌ فٖي كُلِّ عِلْمٍ وَلٰا
عَدِيمُ عِلْمٍ يَسِيرٌ عِنْدَهُ كَثُرٰا
وَ النَّمْلُ يَزْعُمُ نَفْسٖي طُولُهٰا بِيَدٖي
مِنْ اَذْرُعٍ اَرْبَعٌ يَبْغٖي بِهٖ فَخْرًا
ಜ್ಞಾನದ ಎಲ್ಲಾ ಶಾಖೆಗಳಲ್ಲಿ ಪೂರ್ಣತೆಯನ್ನು ಪಡೆದವನನ್ನೋ ಯಾವುದೇ ಒಂದು ಅಲ್ಪ ಜ್ಞಾನವೂ ಇಲ್ಲದವನನ್ನೋ ಕಾಣಲು ಸಾಧ್ಯವಿಲ್ಲ. ಆದರೆ ತಾನು ಮಹಾಜ್ಞಾನಿ ಎಂದಾಗಿದೆ ಆ ಅಲ್ಪಜ್ಞಾನಿಯ ಭಾವನೆ.
ಇರುವೆಯು ತಾನು ತನ್ನ ಕಾಲಿನ ನಾಲ್ಕು ಪಟ್ಟು ಉದ್ದವಿದ್ದೇನೆ ಎಂದು( ನೀನು ನಿನ್ನ ಮೊಳಕೈಯ ನಾಲ್ಕು ಪಟ್ಟು ಉದ್ದವಿರುವ ಹಾಗೆ) ಜಂಭ ಕೊಚ್ಚುವುದು (ಬೀಗುವುದು)
وَلَيْسَ يَعْرِفُ فَضْلَ الْعِلْمِ جَاهِلُهُ
وَلَوْ قَرِيبًا إِلَی مَنْ عِلْمُهُ الدِّيَمُ
مَا لِلضَّفَادِعِ خَيْشُومٌ لِنَوْفِرَةٍ
بَلِ الدَّخَاخِلِ مِنْ بُعْدٍ لَهَا شَمَمُ
ಅವಿದ್ಯಾವಂತನು (ಶಾಂತವಾಗಿ ಸತತವಾಗಿ ಸುರಿಯುವ ಮಳೆಗೆ ಸಮಾನವಾದ) ವಿದ್ಯಾವಂತನೊಂದಿಗೆ ಸಹವಸಿಸುವವನಾದರೂ ವಿದ್ಯೆಯ ಮಹಿಮೆಯನ್ನು ಆತ ಅರಿಯಲ್ಲ.
ತಾವರೆಯ ಬುಡದಲ್ಲೇ ವಾಸಿಸುವ ಕಪ್ಪೆಗೆ ಮೂಗಿಲ್ಲದ ಕಾರಣ ಅದರ ಸುವಾಸನೆಯು ಲಭಿಸದು. ಆದರೆ ಜೀರುಂಡೆಗಳಿಗೆ ( ಜಿರಲೆಗಳಿಗೆ)ಅದರ ಘ್ರಾಣಶಕ್ತಿಯಿಂದ ಎಷ್ಟೋ ದೂರದಿಂದ ತಾವರೆಯ ಪರಿಮಳ ಲಭಿಸುವುದು.
ಇಶಾಅತುಸ್ಸುನ್ನಃ ದರ್ಸ್
Ph:- +919535627170
+918105381393


No comments:
Post a Comment